ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯವಾಗಿ ರೂಢಿಸಿಕೊಳ್ಳಬೇಕಾದ ಗುಣವೆಂದರೆ ಗೌರವ. ಪ್ರತಿ ಹಂತದಲ್ಲಿಯೂ ನಾವು ಇನ್ನೊಬ್ಬರಿಗೆ ಗೌರವಿಸಿದಾಗ ಮಾತ್ರ ಅವರಿಂದ ನಮಗೆ ಗೌರವ ಸಿಗುತ್ತದೆ. ಅದಕ್ಕಾಗಿ ಆದರ್ಶ ವಿದ್ಯಾರ್ಥಿಯಾಗಬಯಸಿದವರು ತಮ್ಮ ತಂದೆ ತಾಯಿಗೆ, ಗುರುವಿಗೆ ಮತ್ತು ಹಿರಿಯರಿಗೆ ತಮ್ಮ ಸುತ್ತಮುತ್ತಲಿನ ಎಲ್ಲರಿಗೆ ಗೌರವ ನೀಡಬೇಕು. ಇದರಿಂದ ಎಲ್ಲರಲ್ಲಿ ಪ್ರೀತಿ ವಿಶ್ವಾಸದಿಂದ ಇರಲು, ಎಲ್ಲರ ಪ್ರೀತಿಗೆ ಪಾತ್ರರಾಗಲು, ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಲು ಸಾಧ್ಯವಾಗುತ್ತದೆ. ಚಿಕ್ಕಂದಿನಿಂದಲೇ ಇದನ್ನು ರೂಢಿಸಿಕೊಂಡರೆ, ಮುಂದಿನ ಬದುಕಿನಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಜನರೊಂದಿಗೆ ಉತ್ತಮವಾಗಿ ಬದುಕಲು ಅವಕಾಶವಾಗುತ್ತದೆ. ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬದುಕಲು ಅರ್ಹರಾಗುತ್ತೇವೆ.
ಪ್ರೀತಿ:
ಮನುಷ್ಯ ಜೀವನದಲ್ಲಿ ಪ್ರೀತಿ, ಹಾಸುಹೊಕ್ಕಾಗಿದೆ. ಎಲ್ಲರಲ್ಲಿ ಪ್ರೀತಿಯಿಂದ ನಡೆದುಕೊಳ್ಳಬೇಕು. ಇದು ಕೊಟ್ಟು ತೆಗೆದುಕೊಳ್ಳುವ ಜೀವದ್ರವ್ಯವೆಂದರೆ ತಪ್ಪಾಗಲಾರದು. ನಮ್ಮ ಸುತ್ತಮುತ್ತಲಿನ ಜನರಿಗೆ ನಾವು ಪ್ರೀತಿ ತೋರಿದರೆ, ಅವರು ನಮಗೆ ಪ್ರೀತಿ ತೋರಿದರೆ, ನಮ್ಮ ಬಾಳು ಬಂಗಾರವಾಗುತ್ತದೆ. ನಮ್ಮ ದೇಶವನ್ನು, ಸಂಸ್ಕೃತಿಯನ್ನು ಮತ್ತು ಪೂರ್ವಜರನ್ನು ಪ್ರೀತಿಸಿ. ನಮ್ಮ ಸುತ್ತಮುತ್ತಲಿರುವ ಎಲ್ಲರ ಪ್ರೀತಿಯನ್ನು ಗಳಿಸುವುದು ತುಂಬಾ ಕಷ್ಟವೇ ಆದರೂ ಅದನ್ನು ಚಿಕ್ಕ ವಯಸ್ಸಿನಲ್ಲಿಯೇ ಗಳಿಸಬೇಕಾಗದ ಅತೀ ಅವಶ್ಯಕತೆಯಿದೆ. ಪ್ರೀತಿಯಿಂದ ಎಂತೆಂತಹ ಯುದ್ಧಗಳನ್ನೇ ಗೆದ್ದ ಉದಾಹರಣಗಳಿವೆ. ಈ ಪ್ರೀತಿಗೆ ಜಗತ್ತನ್ನೇ ಗೆಲ್ಲುವ ಶಕ್ತಿಯಿದೆ. ಅಂತಹ ಶಕ್ತಿಯನ್ನು ಪಡೆಯಲು, ಎಲ್ಲರೊಡನೆ ಪ್ರೀತಿಯಿಂದಿರಲು ನಾವೆಲ್ಲ ಶ್ರಮಿಸಬೇಕಾದ ಅಗತ್ಯವಿದೆ.
ಸೇವೆ:
ನಮ್ಮ ವಿದ್ಯಾರ್ಥಿಗಳಲ್ಲಿ, ಸೇವೆಯ ಮನೋಭಾವ, ಸೇವೆಯ ಮಹತ್ವ, ಸೇವೆಯ ಸ್ವಾದ, ಸೇವೆಯ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾದ ಅವಶ್ಯಕತೆಯಿದೆ. ವಿದ್ಯಾರ್ಥಿ ಜೀವನ ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಜನಸೇವೆ, ಬಡವರ, ನಿರಕ್ಷರಸ್ಥರ ಮತ್ತು ರೋಗಿಗಳ ಸೇವೆಯನ್ನು ಮಾಡುವುದರ ಮಹತ್ವ ತಿಳಿದರೆ, ಭಾವಿ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ. ಸೇವೆಯೆಂಬುವ ಪದ ಜನಮಾನಸದಲ್ಲಿ ಹುಟ್ಟಿ ಸಮಾಜದ ಏಳ್ಗೆಗೆ ಶ್ರಮಿಸಿದ ಶ್ರಮಿಕ ಜನರ ಮಧ್ಯದೊಳಗೆ ಬೆಳೆಯುತ್ತದೆ. ಅದನ್ನು ಪರಿಪಾಲಿಸುವ ಶಕ್ತಿ ನಮ್ಮದಾಗಬೇಕು. ನಮ್ಮೊಳಗಿನ ಸೇವೆಯನ್ನು ಸಮಾಜಕ್ಕೆ ನೀಡಿದಾಗ ನಾವು ಒಬ್ಬ ಸಮಾಜ ಸೇವಕರಾಗಿ ಹೊರಹೊಮ್ಮುತ್ತೇವೆ.
ಆತ್ಮ ಸಂಯಮ:
ಇಂದು ಸಂಯಮ ಕಳೆದುಕೊಂಡು ಬದುಕು ಬರಡಾಗಿಸಿಕೊಂಡ ಅನೇಕ ಯುವಕರನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಮಾಡಬೇಕಾಗಿರುವ ದೇಹ, ಇಂದ್ರೀಯ ಮತ್ತು ಮನಸ್ಸಿನ ಮೇಲೆ ಹಿಡಿತವಿರದ ಕಾರಣ ಅನೇಕ ರೀತಿಯ ಅವಗಢಗಳು ಸಂಭವಿಸುತ್ತವೆ. ಹೀಗಾಗಿ ವಿದ್ಯಾರ್ಥಿ ದೆಸೆಯಿಂದಲೇ ನಾವು ಆತ್ಮ ಸಂಯಮದಂತಹ ಗುಣಗಳನ್ನು ಮಕ್ಕಳಲ್ಲಿ ಬೆಳೆಸಿದರೆ, ಅವುಗಳ ಅಳವಡಿಕೆ ಮಾಡಿದರೆ ಅವರೆಲ್ಲ ಮುಂದಿನ ಬದುಕಿನಲ್ಲಿ ಅವುಗಳ ಪರಿಪಾಲನೆ ಮಾಡಿ ಉತ್ತಮ ವ್ಯಕ್ತಿಗಳಾಗಲು ಸಹಕಾರಿಯಾಗುತ್ತದೆ.
ಆತ್ಮ ನಿಗ್ರಹ:
ಬೆಳೆಯುತ್ತಿರುವ ಪ್ರಪಂಚದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕಾದ ಅಗತ್ಯವಿದೆ. ಆತ್ಮದಲ್ಲಿರುವ ಅದೆಷ್ಟೊ ಒತ್ತಡಗಳು ನಮ್ಮ ಬದುಕಿನ ಅನೇಕ ಕಷ್ಟಗಳಿಗೆ ನೋವುಗಳಿಗೆ ಕಾರಣವಾಗುತ್ತವೆ. ಎದುರಿನ ವ್ಯಕ್ತಿಗಳು ಹೇಗೆ ವರ್ತಿಸುತ್ತಾರೆ ಅವರಿಗೆ ನಾವು ಹೇಗೆ ಉತ್ತರಿಸಬೇಕು. ನಮ್ಮ ಆತ್ಮದೊಳಗಿನ ಅನೇಕ ಸಮಸ್ಯೆಗಳ ನಿಗ್ರಹ ಇಂದಿನ ಕಾಲಮಾನಗಳಲ್ಲಿ ಅವಶ್ಯಕವಿದೆ. ಆತ್ಮದ ವೇದನಗಳ ಮನೋಭಾವಗಳ ನಿಗ್ರಹಕ್ಕೆ ವಿದ್ಯಾರ್ಥಿ ಜೀವನದಲ್ಲಿಯೇ ಕಲಿಸಿಕೊಟ್ಟರೆ ಮಕ್ಕಳು ಭಾವಿ ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಎಲ್ಲರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳ ಮಾತಿನಲ್ಲಿ ಆಲೋಚನೆ ಮತ್ತು ಕೆಲಸದಲ್ಲಿ ನಿಮಗೆ ಹಿಡಿತವಿರಲಿ.
ನಂಬಿಕೆ:
ಮನುಷ್ಯ ಜೀವನದ ಅತೀ ದೊಡ್ಡ ಹಾಗೂ ಅತೀ ಅವಶ್ಯಕವಾಗಿರುವ ಗುಣವೆಂದರೆ ನಂಬಿಕೆ ಇಟ್ಟುಕೊಳ್ಳುವುದು ಮತ್ತು ನಂಬಿಕೆ ಉಳಿಸಿಕೊಳ್ಳುವುದು. ನಿಮ್ಮಲ್ಲಿ, ಇತತರಲ್ಲಿ ಮತ್ತು ದೇವರಲ್ಲಿ ನಂಬಿಕೆಯಿಡಿ. ನಂಬಿ ಕೆಟ್ಟು ಬದುಕು ಹದಗೆಡುವಂತಹ ಅನೇಕ ಸಂದರ್ಭಗಳನ್ನು ನಾವು ನಮ್ಮ ಸುತ್ತಮುತ್ತಲ ಕಾಣುತ್ತೇವೆ. ಅವುಗಳನ್ನು ಧೈರ್ಯದಿಂದ ಎದುರಿಸಲು ನಮಗೆ ಯಾವುದು ನಂಬಬೇಕು ಮತ್ತು ಯಾವುದನ್ನು ನಂಬಬಾರದು ಎಂಬ ಸತ್ಯವರೆತು ಬಾಳಬೇಕಾಗುತ್ತದೆ. ನಂಬಿಕೆಯಂಬ ನಗಾರಿಯನ್ನು ಎಷ್ಟು ಸರಿಯಾಗಿ ನುಡಿಸುವ ಕಲೆ ಕರಗತ ಮಾಡಿಕೊಳ್ಳುತ್ತೇವೆಯೊ ಅಷ್ಟು ಉತ್ತಮವಾದ ಬದುಕು ನಮ್ಮದಾಗುತ್ತದೆ.
ಇದಲ್ಲದೇ ಆದರ್ಶ ವಿದ್ಯಾರ್ಥಿಯಾಗಲು ವಿವೇಕ ಬೇಕು, ಸತ್ಯ-ಅಸತ್ಯ, ಒಳ್ಳೆಯದು-ಕೆಟ್ಟದ್ದು, ನೈತಿಕ-ಅನೈತಿಕತೆಯನ್ನು ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದರ್ಶ ವಿದ್ಯಾರ್ಥಿಯಾಗಲು ಏಕಾಗ್ರತೆ ಕೂಡ ಅವಶ್ಯಕ ಅಧ್ಯಯನದಲ್ಲಿ, ಕೆಲಸದಲ್ಲಿ, ಆಟದಲ್ಲಿ ಮತ್ತು ಪ್ರಾರ್ಥನೆಯಲ್ಲಿ ಏಕಾಗ್ರತೆಯಿರಲಿ. ಸತ್ಯನಿಷ್ಠೂರತೆ ಎಂಬುವುದು ಎಲ್ಲರಲ್ಲಿ ಇರಬೇಕಾದದ್ದು . ನಿಮ್ಮ ಮಾತು, ಕೆಲಸ ಕಾರ್ಯಗಳಲ್ಲಿ ಸತ್ಯನಿಷ್ಠರಾಗಿರಿ. ಕಠಿಣಶ್ರಮ ವಿವೇಕಶಕ್ತಿ, ಪರಿಪೂರ್ಣತೆ ಮತ್ತು ಜ್ಞಾನವನ್ನು ಗಳಿಸಲು ಕಠಿಣ ಶ್ರಮವಹಿಸಬೇಕು. ಶಕ್ತಿಶಾಲಿಗಳಾಗಿ ದೈಹಿಕವಾಗಿ, ಮಾನಸಿಕವಾಗಿ ನೈತಿಕವಾಗಿ ಮತ್ತು ಆಧ್ಯಾತ್ಮೀಕವಾಗಿ ಶಕ್ತಿಶಾಲಿಗಳಾಗಿ. ಶ್ರದ್ಧೆ ಒಳ್ಳೆಯತನ, ಪವಿತ್ರತೆ ಮತ್ತು ಪ್ರಮಾಣಿಕತೆಯಲ್ಲಿ ನಂಬಿಕೆಯಿಡಿ. ಶ್ರದ್ಧೆಯಿಡಿ. ಭಕ್ತಿ ಕರ್ತವ್ಯದಲ್ಲಿ, ಶಿಷ್ಠ ಸಾಧುಗಳಲ್ಲಿ, ಧರ್ಮಗ್ರಂಥಗಳಲ್ಲಿ ಮತ್ತು ದೇವರಲ್ಲಿ ಭಕ್ತಿವುಳ್ಳವರಾಗಿರಿ.
ಅಭ್ಯಾಸ ಪ್ರಾರ್ಥನೆ, ಧ್ಯಾನ ಮತ್ತು ಸ್ಫೂರ್ತಿ ಹಾಗೂ ಶಕ್ತಿಯನ್ನು ನೀಡುವಂತಹ ಪುಸ್ತಕಗಳ ಅಧ್ಯಯನದ ಅಭ್ಯಾಸ ಬೆಳೆಸಿಕೊಳ್ಳಿ. ಸಮದೃಷ್ಠಿ ಸರ್ವರಲ್ಲೂ ಭಗವಂತನಿರುವನೆಂಬುವುದನ್ನರಿತು ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡಿ. ನಿರ್ಧಾರ ಯಶಸ್ಸನ್ನು, ಶಾಂತಿಯನ್ನು, ಪರಮಸುಖವನ್ನೂ ಹಾಗೂ ಧನ್ಯತೆಯನ್ನೂ ಪಡೆದೇ ತೀರುವೆನೆಂಬ ನಿರ್ಧಾರವನ್ನು ಮಾಡಿ. ಹೀಗೆ ಹಲವು ವಿಚಾರಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವಿದ್ಯಾಥಿಯಾಗಿ ಸಮಾಜ ಮೆಚ್ಚುವ ಮಕ್ಕಳಾಗಿ ಎಂಬುವುದು ನನ್ನ ಆಶೆಯ.