ನಮ್ಮ ದೇಶ ಭಕ್ತಿ ಪ್ರಧಾನವಾದದ್ದು , ಇಲ್ಲಿ ಸಂತ ಕಬೀರದಾಸರಂತಹ ಮಾಹಾನ್ ಭಕ್ತಿ ಭಂತದ ವ್ಯಕ್ತಿಗಳು ಆಡಿ ಹೋದ ನಾಡಿದು, ಸದ್ಯಕ್ಕೆ ನಮ್ಮ ಸಂಸ್ಕೃತಿ ಹಾಗೂ ಜನರಲ್ಲಿ ಭಕ್ತಿಯ ಅಭಿಮಾನ ಉಳಿಯಲು ಇರುವ ಏಕೈಕ ಆಧಾರ ಅವರಂತಹ ಅನೇಕ ಸಾಧು ಸಂತರು ನೀಡಿದ ದಾರಿ ಮಾತ್ರ. ಈ ಜಗತ್ತಿನ ಅನೇಕ ಆಧ್ಯಾತ್ಮಿಕ ಒಲವುಗಳಿಗೆ ಪ್ರೇರಣೆ ನೀಡುವ ಇನ್ನೊಂದು ಗ್ರಂಥವೆಂದರೆ ನಮ್ಮ ಭಗವತ್ಗೀತಾ . ಮಾನವ ಜನ್ಮದ ನೈತಿಕತೆ ಹಾಗೂ ಜೀವನ ಸಾರಾಂಶ ನೀಡುವ ಸಾಗರವೆ ಇದು.
0 Comments
ಬಹುದೊಡ್ಡ ಭಾರತ ಬಹುಸಂಖ್ಯಾತರೆ ಇದಕ್ಕೆ ಬಂಡವಾಳ , ಆದರೆ ಅವರನ್ನೆ ಕಡೆಗಣಿಸಲಾಗುತ್ತಿದೆ . ಎನಿಸುತ್ತಿದೆ ಭಾರತದ ಬಡತನ ರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ.
ಬೆಳಿಯುತ್ತಿರುವ ನಮ್ಮ ದೇಶ ಹಲವು ವಿಷಯಗಳಲ್ಲಿ ತುಂಬಾ ಶ್ರೀಮಂತಿಕೆ ಗಳಿಸಿದೆ . ಇಂದು ಭಾರತ ಈಡಿ ಪ್ರಪಂಚವೆ ಕಣ್ಣರಳಿಸಿ ಬೆರಗಾಗುವಂತಹ ಸಾಧನೆ ಮಾಡಿದ್ದು ತುಂಬಾ ಹೆಮ್ಮೆ ಪಡುವಂತಹದ್ದು . ಆದರೆ ನಾವು ನಮ್ಮ ನೈಜ ಸಂಸ್ಕೃತಿಯನ್ನು ಮರೆತು ಬಿಡುತ್ತಿದ್ದೇವೆ ಅನಿಸುತ್ತಿಲ್ಲವೆ ? ನಮ್ಮ ಪುರುಷ ಹಾಗೂ ಮಹಿಳೆ ನಮ್ಮ ಸಂಸ್ಕೃತಿ ನಾಡು ನುಡಿಗೆ ಧಕ್ಕೆ ಆಗುವಂತಹ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿಲ್ಲವೆ?
" ಯಾರಪ್ಪ ತಮ್ಮ ನೀನು, ನಮ್ಮ ಮನೆಯತನಕ ಬಂದು, ನಮ್ಮ ಹುಡುಗಿಗೆ ಕೇಳುವಷ್ಟ ಧೈರ್ಯ ನಿನಗೆ, ಎಷ್ಟಿರಬೇಕು ನಿನ್ನದು ಯಾರು ನೀನು " ಅಪ್ಪ ಗಧರಿಸುತ್ತಾ. '' ಸರ್ ನಾನು ನಿಮ್ಮ ಮಗಳನ್ನ ತುಂಬಾ ಪ್ರೀತಿಸುತ್ತೀನಿ, ಅವಳು ನನಗೆ ಪ್ರೀತಿಸುತ್ತಾಳೆ, ಅದಕ್ಕಾಗಿ ಅವಳನ್ನು ಮದುವೆ ಮಾಡಿಕೊಳ್ಳಲು ನಾನು ತಯಾರಾಗಿರುವೆ. ದಯವಿಟ್ಟು ಇಲ್ಲಾ ಅನಬೇಡಿ ಸರ್ ಪ್ಲೀಸ್ " ಇವನು. ನನ್ನ ಮನೆಯವರ ಮುಂದೆ ಅಂಗಲಾಚಿ ಬೇಡಿಕೊಳ್ಳತೊಡಗಿದ.
|
ಇಲ್ಲಿಯವರೆಗೆ...
October 2023
"
|