ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಗ್ಗೆ ಹೇಳಬಯಸುತ್ತೇನೆ. ಪ್ರಥಮಿಕ ಶಾಲೆ ಊರಿನ ಮಧ್ಯೆದೊಳಗೆ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕ ನನ್ನ ಶಾಲೆ. ಶಾಲೆಯಿತ್ತು ಆದರೆ ಎರಡೇ ಎರಡು ಕೊಠಡಿ, ಶಾಲೆಯ ಆವರಣ ಚಿಕ್ಕದು ಆದರೆ ಅದರಲ್ಲಿ ಬೆಳೆದ ಆಲದ ಮರ ಆಕಾಶದೆತ್ತರ ಮತ್ತು ಅಗಲ. ನಮ್ಮ ಮೂರು ತರಗತಿಗಳು ಆಲದ ಮರವೇ ಆಸರೆಯಾಗಿತ್ತು. ಮಳೆ ಏನಾದರು ಜೋರಾಗಿ ಸುರಿದರೆ ಎರಡು ಕೊಠಡಿಯಲ್ಲಿ ಏಳು ತರಗತಿಯ ಮಕ್ಕಳು ಗದ್ದಲವೊ ಗದ್ದಲ. ಶೌಚಾಲಯ ಹಂಗೆಂದ್ರೇನು ಎಂದು ಕೇಳುತ್ತಿದ್ದೇವು. ಅರ್ಜಂಟಾದರೆ ನೇರವಾಗಿ ದೇವಸ್ಥಾನದ ಹಿಂಬಾಗದಲ್ಲಿ ಶಾಲೆಯ ಕೊಠಡಿ ಹಿಂಭಾಗದಲ್ಲಿ ಮೂತ್ರ ಅಷ್ಟೆ ಯಾಕೆ ಕೆಲವೊಮ್ಮೆ ತರಗತಿಯಲ್ಲಿಯೇ ಸರಳವಾಗಿ ಮೂತ್ರ ವಿಸರ್ಜನೆ ಮಾಡಿ ಶಿಕ್ಷಕರಿಂದ ಒದೆ ತಿಂದ ಅನುಭವ ಇನ್ನು ಮಾಸಿಲ್ಲ. ನಮ್ಮ ಶಾಲೆಗಳು ಇದ್ದ ಎರಡು ಕೊಠಡಿಗಳು ಅದೆಷ್ಟೊ ವರ್ಷಗಳಿಂದ ಸುಣ್ಣ ಬಣ್ಣದ ಮುಖ ಕಾಣದೇ ಬಿಕೋ ಎನ್ನುತ್ತಿದ್ದವು.
ಒಂದು ಕಾಲವಿತ್ತು, ಸರಕಾರಿ ಶಾಲೆಗಳೆಂದರೆ ಮುಗು ಮುರಿಯುತ್ತಿದ್ದೇವು. ಶಾಲೆಗಳಲ್ಲಿ ಕಟ್ಟಡವಿಲ್ಲ, ಕಟ್ಟವಿದ್ದರು ಬಾಗಿಲು ಕಿಟಕಿಗಳಿಲ್ಲ, ಶಿಕ್ಷಕರು ಸರಿಯಾದ ಸಮಯಕ್ಕೆ ಬರುವುದಿಲ್ಲ, ಪಾಠ ಸರಿಯಾಗಿ ಮಾಡುವುದಿಲ್ಲ, ಪ್ರತಿ ವರ್ಷವು ಫಲಿತಾಂಶದಲ್ಲಿ ಹಿಂದೆ, ಮೂಲಭೂತ ಸೌಕರ್ಯಗಳಿಲ್ಲ, ಗುಣಮಟ್ಟದ ಶಿಕ್ಷಕರು ಮತ್ತು ಶಿಕ್ಷಣವಿಲ್ಲ ಹೀಗೆ ಈ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಗ್ಗೆ ಹೇಳಬಯಸುತ್ತೇನೆ. ಪ್ರಥಮಿಕ ಶಾಲೆ ಊರಿನ ಮಧ್ಯೆದೊಳಗೆ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕ ನನ್ನ ಶಾಲೆ. ಶಾಲೆಯಿತ್ತು ಆದರೆ ಎರಡೇ ಎರಡು ಕೊಠಡಿ, ಶಾಲೆಯ ಆವರಣ ಚಿಕ್ಕದು ಆದರೆ ಅದರಲ್ಲಿ ಬೆಳೆದ ಆಲದ ಮರ ಆಕಾಶದೆತ್ತರ ಮತ್ತು ಅಗಲ. ನಮ್ಮ ಮೂರು ತರಗತಿಗಳು ಆಲದ ಮರವೇ ಆಸರೆಯಾಗಿತ್ತು. ಮಳೆ ಏನಾದರು ಜೋರಾಗಿ ಸುರಿದರೆ ಎರಡು ಕೊಠಡಿಯಲ್ಲಿ ಏಳು ತರಗತಿಯ ಮಕ್ಕಳು ಗದ್ದಲವೊ ಗದ್ದಲ. ಶೌಚಾಲಯ ಹಂಗೆಂದ್ರೇನು ಎಂದು ಕೇಳುತ್ತಿದ್ದೇವು. ಅರ್ಜಂಟಾದರೆ ನೇರವಾಗಿ ದೇವಸ್ಥಾನದ ಹಿಂಬಾಗದಲ್ಲಿ ಶಾಲೆಯ ಕೊಠಡಿ ಹಿಂಭಾಗದಲ್ಲಿ ಮೂತ್ರ ಅಷ್ಟೆ ಯಾಕೆ ಕೆಲವೊಮ್ಮೆ ತರಗತಿಯಲ್ಲಿಯೇ ಸರಳವಾಗಿ ಮೂತ್ರ ವಿಸರ್ಜನೆ ಮಾಡಿ ಶಿಕ್ಷಕರಿಂದ ಒದೆ ತಿಂದ ಅನುಭವ ಇನ್ನು ಮಾಸಿಲ್ಲ. ನಮ್ಮ ಶಾಲೆಗಳು ಇದ್ದ ಎರಡು ಕೊಠಡಿಗಳು ಅದೆಷ್ಟೊ ವರ್ಷಗಳಿಂದ ಸುಣ್ಣ ಬಣ್ಣದ ಮುಖ ಕಾಣದೇ ಬಿಕೋ ಎನ್ನುತ್ತಿದ್ದವು.
0 Comments
ಇತ್ತೀಚಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಸರಕಾರಿ ಶಾಲೆಗಳಲ್ಲಿನ ಬೇಸಿಗೆ ಸಂಭ್ರಮ ಕಾರ್ಯಕ್ರಮಕ್ಕೆ ಬೇಟಿ ನೀಡಿದೆ. ಗ್ರಾಮಗಳಲ್ಲಿ ಈ ಕಾರ್ಯಕ್ರಮದ ಕುರಿತು ಮಾತನಾಡಿದಾಗ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳನ್ನು ಮಾತನಾಡಿಸಿದರೆ, “ಬೇಸಿಗೆ ಸಂಭ್ರಮಕ್ಕೆ ಯಾಕೆ ಬರುತ್ತೀರಾ? ಎಂದು ಕೇಳಿದರೆ ಮಕ್ಕಳ ಥಟ್ಟನೇ ಉತ್ತರ, ಬಿಸಿಯೂಟಕ್ಕೆ ಸರ್” ಎಂದಿರುತ್ತದೆ. ಈ ವಾಕ್ಯದ ನಂತರ ಕಲಿಕೆಯ ಬಗ್ಗೆ ಮಾತನಾಡುತ್ತಾರೆ. ಇದರ ಅರ್ಥ ಸರಕಾರದ ಶಿಕ್ಷಣ ಇಲಾಖೆ ಮಕ್ಕಳ ಹಸಿವು ನೀಗಿಸುತ್ತಿದೆ ಜೊತೆಗೆ ಅಕ್ಷರ ಕಲಿಸುತ್ತಿದೆ. ಸಾಕ್ಷರ ಭಾರತವನ್ನು ಉಜ್ವಲಗೊಳಿಸುತ್ತಿದೆ ಎಂದು ಅರ್ಥ. ನನಗೆ ಆ ಮಕ್ಕಳ ಮಾತಿನಲ್ಲಿ ಹೊಳೆದಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಈ ಬಿಸಿಯೂಟ ಎಷ್ಟು ಮಹತ್ವದ ಸ್ಥಾನ ಪಡೆದಿದೆ ಎಂದು. ಜ್ಞಾನದ ಜೊತೆಗೆ ಹಸಿವು ನೀಗಿಸುವ ಈ ಯೋಜನೆ ಬಡಮಕ್ಕಳ ಪಾಲಿಗೆ ವಿಶೇಷವಾಗಿದೆ.
ಪ್ರಸ್ತುತ ಸಾಮಾಜಿಕ ಬದುಕಿನಲ್ಲಿ ಅತ್ಯಂತ ಬಿಜಿಯಾಗಿರುವ, ಬಿಡುವಿಲ್ಲದ ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಐಟಿಬಿಟಿ ಕೆಲಸಗಾರರು, ತಂತ್ರಜ್ಞಾನಿಗಳು, ಸಾಫ್ಟವೇರ್ ಹಾರ್ಡವೇರ್ ನವರು ಇತ್ಯಾದಿ ಕೆಲಸಗಾರರೆಂದು ಹೇಳಿದರೆ ನನ್ನ ಪ್ರಕಾರ ಅದು ತಪ್ಪು ಉತ್ತರವಾಗಿದೆ. ಯಾಕೆ ಹೀಗೆ ನನಗೆ ಅನಿಸಿತು ಎಂದರೆ, ನನ್ನ ಪ್ರಕಾರ ಈ ಸಮಾಜದಲ್ಲಿ ಬಿಡುವಿಲ್ಲದ ವ್ಯಕ್ತಿಗಳೆಂದರೆ ನಮ್ಮ “ಮಕ್ಕಳು” ಹೌದು ನಮ್ಮ ಸುತ್ತಮುತ್ತಲಿನ ಶಾಲೆ ಕಲಿಯುವ ಚಿಕ್ಕ ಚಿಕ್ಕ ಮಕ್ಕಳನ್ನು ಒಮ್ಮೆ ಗಮನಿಸಿ, ಅವರೆಷ್ಟು ಒತ್ತಡದ ಜೀವನ ಸಾಗಿಸುತ್ತಿದ್ದಾರೆ, ಅದರ ಜೊತೆಗೆ ತಮ್ಮೊಳಗಿನ ನೋವು ಯಾರಿಗೂ ಹೇಳಿಕೊಳ್ಳದೇ ಸಾಗಿಸುತ್ತಿದ್ದಾರೆ. ನೀವು ನಿಜವಾದ ಜೀವಂತ ದೇವರುಗಳನ್ನು ನೋಡಬೇಕೆಂದರೆ ನಿಮ್ಮ ನಿಮ್ಮ ಮಕ್ಕಳನ್ನು ನೋಡಿ. ನಿಜ ಪ್ರತ್ಯಕ್ಷ ದೇವರುಗಳು ಎಂದರೆ ಮಕ್ಕಳೇ. ನನ್ನ ಅನುಭವದ ಪ್ರಕಾರ ಹೊಸದಾಗಿ ರೂಪುಗೊಂಡಿರುವ ಮುಗ್ಧ ಸ್ವರೂಪದ ಪುಟ್ಟ ಚೇತನಾ ಶಕ್ತಿಗಳು. ಎಷ್ಟು ಶುದ್ಧವಾದ ಮನಸ್ಸು ಸ್ವಲ್ಪವೂ ಕಲ್ಮಷ ಇಲ್ಲದ, ಚೂರೂ ಕೆಟ್ಟಬುದ್ಧಿ ಇಲ್ಲದ, ಅನಂತದಿಂದ ಆಗತಾನೇ ಇಳಿದುಬಂದ ಜೀವಗಳು. ನಮ್ಮ ಸುತ್ತಮುತ್ತಲಿನ ಮಕ್ಕಳೆಲ್ಲರೂ ಅದ್ಭುತವಾಗಿ ಹೆಣೆದಂತಹ ಹಗುರವಾದ ನೂಲಿನ ಬಟ್ಟೆಗಳಂತೆ. ಮುಗ್ಧತೆಯ ತಾಣಗಳಿದ್ದಂತೆ. ನೇರ ನಡೆ ನುಡಿ, ಕಂಡದ್ದನ್ನು ಕಂಡಂತೆ ಹೇಳುವುದು, ತೊದಲು ನುಡಿ, ಏನು ಮಾಡಿದರೆ ಏನಾಗುವುದು ಎಂಬ ಅರಿವೇ ಇಲ್ಲದ, ಇನ್ನೊಬ್ಬರು ಹೇಳುವುದನ್ನು ಕೇಳಿ ನಕಲು ಮಾಡುವ, ಮತ್ತೆ-ಮತ್ತೆ ಕೇಳಿದ ಪ್ರಶ್ನೆಗಳನ್ನೇ ಕೇಳುವ, ನಿಂತಕಡೆ ನಿಲ್ಲದ ಅದ್ಭುತ ಜೀವಗಳು. ಇವರು ಈ ಸಮಾಜದ ಸಂಪೂರ್ಣ ವ್ಯಕ್ತಿಗಳು ಎಂಬುವುದು ಹಗಲ ಸೂರ್ಯನಷ್ಟೆ ಸತ್ಯವಾಗಿದೆ.
|
ಇಲ್ಲಿಯವರೆಗೆ...
October 2023
"
|